Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಗುಲಾಬಿಯ ಅಂದ ಎಷ್ಟು ಹೊತ್ತಿನದು? ಒಮ್ಮೆ ಓದಿ ಅರ್ಥ ಮಾಡಿಕೊಳ್ಳಿ.. ಡಿವಿಜಿಯವರ ಕಗ್ಗದ ಮಹತ್ವ ತಿಳಿಯುವುದು...

ಗುಲಾಬಿಯ ಅಂದ ಎಷ್ಟು ಹೊತ್ತಿನದು? ಒಮ್ಮೆ ಓದಿ ಅರ್ಥ ಮಾಡಿಕೊಳ್ಳಿ.. ಡಿವಿಜಿಯವರ ಕಗ್ಗದ ಮಹತ್ವ ತಿಳಿಯುವುದು ಖಚಿತ.

ಗುಲಾಬಿಯ ಅಂದ ಎಷ್ಟು ಹೊತ್ತಿನದು.

ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ |
ಪೊಂಗುವಾನಂದವದನನುಭವಿಸಿದವನ್ ಅಜನ ಹಂಗಿಪನೆ ಕೃಪಣತೆಗೆ? – ಮಂಕುತಿಮ್ಮ ||

ಆರು ತಿಂಗಳ ದುಡಿತದ ನಂತರ ಕೆಂಪು ಗುಲಾಬಿಯು ಬೆಳೆಯುತ್ತದೆ. ಅದರ ಸಂಪತ್ತು ಅರ್ಧ ಘಳಿಗೆಯ ಹೂವಿನ ರೂಪದಲ್ಲಿ ಶೋಭಿಸುತ್ತದೆ. ಹೊರ ಹೊಮ್ಮುವ ಅದರ ಆನಂದವನ್ನು ಅನುಭವಿಸಿದವನು ಬ್ರಹ್ಮನನ್ನು ಜಿಪುಣನೆಂದು ಹಂಗಿಸುತ್ತಾನೇನು?

ಒಂದು ಗುಲಾಬಿಯ ಹೂವನ್ನು ಪಡೆಯಬೇಕಾದರೆ ಆರು ತಿಂಗಳ ಕಾಲ ಅದರ ಅರೈಕೆ ಮಾಡಬೇಕಾಗುತ್ತದೆ. ಆರು ತಿಂಗಳ ದುಡಿಮೆಯ ನಂತರ ಕೆಂಪು ಗುಲಾಬಿ ಹೂ ಅರಳಿ ನಿಲ್ಲುತ್ತದೆ. ಅದರೆ ಅದರ ಸೊಬಗು ರಂಜಿಸುವುದು ಸ್ವಲ್ಪ ಕಾಲ ಮಾತ್ರ. ಅರೆಗಳಿಗೆಯ ಹೂವಿನಲ್ಲಿಯೇ ಗುಲಾಬಿಯ ಸಂಪತ್ತು ಅಡಗಿದೆ. ಆದರೆ ಅಷ್ಟು ಆರೈಕೆ ಮಾಡಿದ ನಂತರ ಚೆಂಗುಲಾಬಿ ಅರಳಿ ನಿಂತಾಗ ಅಪರಿಮಿತ ಆನಂದ ಬೆಳೆಸಿದವನಿಗಾಗುತ್ತದೆ. ಆರು ತಿಂಗಳ ಶ್ರಮಕ್ಕೆ ಅರೆ ಗಳಿಗೆಯ ಸಂಪತ್ತನ್ನು ಅವನು ಪಡೆಯುತ್ತಾನೆ. ಯಾರು ಅದರ ಆನಂದವನ್ನು ಅನುಭವಿಸುತ್ತಾನೋ ಅವನು ‘ಬ್ರಹ್ಮ ಬಹಳ ಜಿಪುಣ. ಅರಗಳಿಗೆಯ ಸಂಪತ್ತಿಗಾಗಿ ನನ್ನನ್ನು ಆರು ತಿಂಗಳ ಕಾಲ ದುಡಿಸಿದ’ ಎಂದು ಹಂಗಿಸುತ್ತಾನೆಯೇ? ಸಿಗುವ ಆನಂದವನ್ನು ಮನಸ್ಸಿನಲ್ಲಿ ಬೇರೆ ಏನನ್ನೂ ಇಟ್ಟುಕೊಳ್ಳದೆ ಅನಿಭವಿಸಿಬಿಡುತ್ತಾನೆ. ಲೋಕದ ಬದುಕೇ ಹಾಗೆ. ಕ್ಷಣ ಸುಖಕ್ಕಾಗಿ ವರ್ಷಗಟ್ಟಲೆ ಶ್ರಮಪಡಬೇಕಾಗುತ್ತದೆ. ಆ ಕ್ಷಣದ ಸುಖದ ಮೌಲ್ಯ ಹೆಚ್ಚು. ಅದರೆ ಅನುಭವಿಸಲ್ಪಡುವ ಕಾಲ ಮಾತ್ರ ಕಡಿಮೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!