Sunday, July 13, 2025
spot_img
Homeಅಧಿಕಾರಿಗಳೇ ಇಲ್ನೋಡಿಪ್ರಾಚೀನ ದೇಗುಲದ ಪ್ರಾಂಗಣ ಅಗೆದ ನಿಧಿಗಳ್ಳರು. ದೂರು ದಾಖಲಿಸಲು ಚಿಲುಗೋಡು ಗ್ರಾಮಸ್ಥರು ಮೀನಾಮೇಷ?

ಪ್ರಾಚೀನ ದೇಗುಲದ ಪ್ರಾಂಗಣ ಅಗೆದ ನಿಧಿಗಳ್ಳರು. ದೂರು ದಾಖಲಿಸಲು ಚಿಲುಗೋಡು ಗ್ರಾಮಸ್ಥರು ಮೀನಾಮೇಷ?


  • ಪ್ರಾಚೀನ ದೇಗುಲದ ಪ್ರಾಂಗಣ ಅಗೆದ ನಿಧಿಗಳ್ಳರು.
  • ದೂರು ದಾಖಲಿಸಲು ಚಿಲುಗೋಡು ಗ್ರಾಮಸ್ಥರು ಮೀನಾಮೇಷ?

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ.

ತಾಲೂಕಿನ ಚಿಲುಗೋಡು ಗ್ರಾಮದ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇಗುಲದ ಗರ್ಭಗುಡಿ ಮುಂದಿನ ಪ್ರಾಂಗಣವನ್ನು ದುಷ್ಕರ್ಮಿಗಳು ನಿಧಿ ಆಸೆಗೆ ಅಗೆದು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಸುಮಾರು 11ನೇ ಶತಮಾನದ ಪುರಾತನ ದೇವಸ್ಥಾನವಾಗಿರುವ ಹಿನ್ನಲೆಯಲ್ಲಿ ಹಿಂದೆ ರಾಜರ ಆಳ್ವಿಕೆಯಲ್ಲಿ ದೇಗುಲಗಳಲ್ಲಿ ನಿಧಿ ಸಂಗ್ರಹಿಸಿಟ್ಟಿರಬಹುದೆಂಬ ಮೌಢ್ಯತೆಯಿಂದ ಈ ದೇವಸ್ಥಾನವನ್ನು ಈಗಾಗಲೇ ಐದಾರು ಬಾರಿ ನಿಧಿಚೋರರು ವಿರೂಪಗೊಳಿಸಿದ್ದಾರೆ. ಒಂದೊಮ್ಮೆ ಗರ್ಭಗುಡಿ ಆವರಣದಲ್ಲಿ ಅಗೆದು ಶೋಧಿಸಿದ್ದರು. ಗರ್ಭಗುಡಿ ಮುಂದಿನ ಪ್ರಾಂಗಣದಲ್ಲಿ ಇದು ಮೂರನೇ ಬಾರಿ.ದೇಗುಲದಲ್ಲಿನ ಬೃಹತ್ ಗಾತ್ರದ ಬಂಡೆ ಸರಿಸಿ ನಾಲ್ಕೈದು ಅಡಿಯಲ್ಲಿ ಮಣ್ಣು ತೆಗೆದು ನಿಧಿ ಇರುವ ಶಂಕೆಯಿಂದ ಕಳ್ಳರು ಶೋಧಿಸಿದ್ದಾರೆ.ಶೋಧನೆ ಬಳಿಕ ಕಳ್ಳರಿಗೆ ಏನಾದರೂ ಸಿಕ್ಕಿದಿಯೋ, ಇಲ್ಲವೋ ಗೊತ್ತಿಲ್ಲ ಆದರೆ ನಿರಂತರ ದೇಗುಲದ ಮೇಲೆ ದಾಳಿ ಮಾತ್ರ ನಿಂತಿಲ್ಲ.

ದೇವಸ್ಥಾನದ ಆವರಣದಲ್ಲಿ ಶಾಸನವೊಂದು ಇದೆ. ಇದರ ಪ್ರಕಾರ 11ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ 6ನೇ ವಿಕ್ರಮಾದಿತ್ಯನ ಅವಧಿಯಲ್ಲಿ ಸಾಮಂತರಾಗಿದ್ದ ನೊಳಂಬವಾಡಿಯ ಮಹಾಮಂಡಲೇಶ್ವರನಾದ ತ್ರಿಭುವನ ಮಲ್ಲಪಾಂಡ್ಯದೇವರ ಆಡಳಿತ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಈ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದರೂ ಪುರಾತತ್ವ ಇಲಾಖೆಗೆ ಸಂಬಂಧಿಸಿಲ್ಲ. ಸ್ಥಳೀಯವಾಗಿ ಗ್ರಾಮಸ್ಥರು ‘ಪುರಾತನ ಶ್ರೀಕಲ್ಲೇಶ್ವರ ಸಮಿತಿ’ ಎಂದು ರಚಿಸಿ
ದೇಗುಲದ ರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯ ನಡೆಸುತ್ತಿದ್ದಾರೆ ಎನ್ನುವುದು ಬಿಟ್ಟರೆ ನಿಧಿಗಳ್ಳತನ ನಡೆದಾಗ ಕನಿಷ್ಟ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿಲ್ಲ. ಈ ನಡೆಗೆ ಗ್ರಾಮದ ಯುವಕರ ವಿರೋಧ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಐತಿಹಾಸಿಕ ದೇಗುಲದ ಸಂರಕ್ಷಣೆಗೆ ಸೂಕ್ತ ಕ್ರಮವಹಿಸಬೇಕು. ನಿಧಿಗಳ್ಳರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!