Sunday, July 13, 2025
spot_img
Homeತಾಲೂಕು ಸುದ್ದಿನಿಯಮಿತ ಬದುಕು ಯಾರಿಗಿಲ್ಲ? ಡಿವಿಜಿಯವರ ಈ ಕಗ್ಗ ಪ್ರತಿಯೊಬ್ಬರು ಓದಲೇಬೇಕಾದ್ದು.

ನಿಯಮಿತ ಬದುಕು ಯಾರಿಗಿಲ್ಲ? ಡಿವಿಜಿಯವರ ಈ ಕಗ್ಗ ಪ್ರತಿಯೊಬ್ಬರು ಓದಲೇಬೇಕಾದ್ದು.

ನಿಯಮಿತ ಬದುಕು ಯಾರಿಗಿಲ್ಲ?

ತರಣಿಶಶಿಪಥಗಳನು ಧರೆವರುಣಗತಿಗಳನು ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ |ನರನರಸಿಕೊಳಲಿ ದಾರಿಯ ತನಗೆ ತಾನೆಂದು ತೊರೆದನೇತಕೆ ನಮ್ಮ? – ಮಂಕುತಿಮ್ಮ ||

ಸೂರ್ಯಚಂದ್ರರ ದಾರಿಗಳನ್ನು, ಭೂಮಿ ನೀರುಗಳ ಚಲನೆಯನ್ನು ವಾಯು ಅಗ್ನಿಗಳ ವೇಗಗಳನ್ನು ನಿಯಮಕ್ಕೊಳಪಡಿಸಿದ ಆ ಪರಮಾತ್ಮನು, ಮನುಷ್ಯನು ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳಲಿ ಎಂದು ನಮ್ಮನ್ನು ಏಕೆ ಬಿಟ್ಟುಬಿಟ್ಟಿದ್ದಾನೆ.

ಭಗವಂತ ಈ ವಿಶ್ವದಲ್ಲಿ ಎಲ್ಲದಕ್ಕೂ ಒಂದು ನಿಯಮವನ್ನು ವಿಧಿಸಿದ್ದಾನೆ. ಸೂರ್ಯ ಚಂದ್ರರು ಸದಾ ತಮ್ಮ ಪಥದಲ್ಲಿಯೇ ಸಾಗುವಂತೆ ಮಾಡಿದ್ದಾನೆ. ಈ ಭೂಮಿಗೆ ಒಂದು ನಿರ್ದಿಷ್ಟ ಚಲನೆಯನ್ನು ನಿಯಮಿಸಿದ್ದಾನೆ. ನೀರು ಸದಾ ಮೇಲಿನಿಂದ ಕೆಳಕ್ಕೆ ಹರಿಯುತ್ತದೆ. ಗಾಳಿಗೂ ಒಂದು ನಿಯಮವಿದೆ. ಅಗ್ನಿ ಸದಾ ಮೇಲ್ಮುಖವಾಗಿಯೇ ಉರಿಯುತ್ತದೆ. ಇಷ್ಟೆಲ್ಲ ನಿಯಮಿಸಿದ ಭಗವಂತ ಮನುಷ್ಯನಿಗೇಕೆ ನಿಯಮವನ್ನು ವಿಧಿಸಿಲ್ಲ? ಅವನ ದಾರಿಯನ್ನು ಅವನೇ ನೋಡಿಕೊಳ್ಳಲಿ ಎಂದು ನಮ್ಮನ್ನೇಕೆ ತೊರೆದು ಬಿಟ್ಟಿದ್ದಾನೆ? ಪ್ರಕೃತಿಯಲ್ಲಿ ಎಲ್ಲವೂ ಬಂದು ನಿಯಮಕ್ಕೆ ಬದ್ಧವಾಗಿ ನಡೆಯುತ್ತವೆ. ಸೂರ್ಯೋದಯ ಚಂದ್ರೋದಯಗಳು ನಿಗದಿತ ಸಮಯದಲ್ಲಿಯೇ ನಡೆಯುತ್ತವೆ. ಪ್ರಾಣಿ-ಪಕ್ಷಿಗಳು ಅರುಣೋದಯಕ್ಕೆ ಎಚ್ಚೆತ್ತು ತಮ್ಮ ದಿನಚರಿ ಆರಂಭಿಸುತ್ತವೆ. ಆದರೆ ಮನುಷ್ಯ ಮಾತ್ರ ಈ ನಿಯಮಗಳಿಗೆ ಅಂಟಿಕೊಂಡಿಲ್ಲ. ಬೆಳಗು ಅವನನ್ನು ಎಚ್ಚರಿಸುವುದಿಲ್ಲ. ಕೆಲವೊಮ್ಮೆ ಬಿಸಿಲು ಅವನನ್ನು ಜಾಗ್ರತಗೊಳಿಸುವತ್ತ ಸೋತು ಬಿಡುತ್ತದೆ. ಮನುಷ್ಯನ ಚಲನವಲನಗಳಲ್ಲಿಯೂ ಒಂದು ನಿಯಮವಿಲ್ಲ. ಅವನ ಬಗ್ಗೆ ಇದಮಿತ್ಥಂ ಎಂದು ತೀರ್ಮಾನ ತೆಗೆದುಕೊಳ್ಳಲಾಗದು. ಭಗವಂತ ಹೀಗೇಕೆ ಮಾಡಿದ?

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!