Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಯಾರು ನಮಗೆ ಎದುರಾಳಿ? ನಿಜಶತ್ರು ಯಾರೆಂಬುದು ಗೊತ್ತೇನು? ಡಿವಿಜಿಯವರು ಏನೇಳಿದ್ದಾರೆ ಒಮ್ಮೆ ಓದಿ.

ಯಾರು ನಮಗೆ ಎದುರಾಳಿ? ನಿಜಶತ್ರು ಯಾರೆಂಬುದು ಗೊತ್ತೇನು? ಡಿವಿಜಿಯವರು ಏನೇಳಿದ್ದಾರೆ ಒಮ್ಮೆ ಓದಿ.

ಯಾರು ನಮಗೆ ಎದುರಾಳಿ ?

ಸಮವಿಲ್ಲ ಸೃಷ್ಟಿಯಲಿ, ನರನಂತೆ ನರನಿಲ್ಲ ಕ್ಷಮೆಯುಮವಳೊಳಗಿಲ್ಲ, ಕರ್ಮದಂತೆ ಫಲ |
ಕ್ರಮವೊಂದೆ ನೀಮಾಗಿಸಿರಿ ನೋಳ್ವೆನಾನೆನುತೆ ನಮಗವಳ್ ಪ್ರಸ್ಪರ್ಧಿ – ಮಂಕುತಿಮ್ಮ ||

ಈ ಸೃಷ್ಟಿಯಲ್ಲಿ ಯಾವುದು ಸಮವಿಲ್ಲ. ಮನುಷ್ಯನಂತೆ ಮನುಷ್ಯನಿಲ್ಲ ಕ್ಷಮೆಯೂ ಅವಳಲಿಲ್ಲ. ಕರ್ಮದಂತೆ ಫಲ ದೊರೆಯುತ್ತದೆ “ಒಂದು ಕ್ರಮದಲ್ಲಿ ಇದನ್ನು ನೀವು ಮಾಡಿ ನಾನು ನೋಡುತ್ತೇನೆ” ಎನ್ನುತ್ತಾ ನಮಗವಳು ಎದುರಾಳಿಯಾಗಿದ್ದಾಳೆ.

ಸೃಷ್ಟಿಯ ಕ್ರಮದಲ್ಲಿ ಎಲ್ಲವೂ ಸಮಾನತೆ ಕಂಡುಬರುವುದಿಲ್ಲ. ಒಬ್ಬ ಮನುಷ್ಯ ಇನ್ನೊಬ್ಬನಂತೆ ಇರುವುದಿಲ್ಲ. ಒಂದು ಮರ ಇನ್ನೊಂದರಂತೆ ಇರುವುದಿಲ್ಲ. ಒಂದು ಹೂವು ಇನ್ನೊಂದರಂತೆ ಇರುವುದಿಲ್ಲ. ಅವಳು ಯಾರನ್ನು, ಯಾವ ಕಾರಣಕ್ಕು ಕ್ಷಮಿಸುವುದಿಲ್ಲ. ತಪ್ಪು ಮಾಡಿದವನು ಅವಳ ನ್ಯಾಯ ಸ್ಥಾನದಲ್ಲಿ ಶಿಕ್ಷೆ ಅನುಭವಿಸಲೇಬೇಕು. ಈಗೀಗ ಮನುಷ್ಯ ಪ್ರಕೃತಿಯನ್ನು ಬೇಕಾಬಿಟ್ಟಿ ನಾಶ ಮಾಡಹತ್ತಿದ್ದಾನೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ. ಮಳೆಯೇ ಬರದಿದ್ದರೆ ಯಾರನ್ನು ದೂರುವುದು? ಮಾಡಿದ್ದುಣ್ಣೋ ಮಹಾರಾಯ! ಅವಳು ಕೊಡುವ ಶಿಕ್ಷೆಗೆ ಎಲ್ಲರೂ ತಲೆಬಾಗಲೇಬೇಕು. ನಾವೇನಾದರೂ ಇವೆನೆಲ್ಲ ಸಕ್ರಮಗೊಳಿಸುತ್ತೇವೆ ಎಂದು ಹೊರಟರೆ ಅವಳು ನಮಗೆ ಎದುರಾಳಿಯಾಗಿ ನಿಲ್ಲುತ್ತಾಳೆ. ನೀವಿದನ್ನು ಕ್ರಮಬದ್ಧವಾಗಿಸಿರಿ. ನಾನು ನೋಡಿಬಿಡುತ್ತೇನೆಂದು ನಮಗವಳು ಪಂಥಾಹ್ವಾನ ನೀಡುತ್ತಾಳೆ. ಈ ವಿಷಯದಲ್ಲಿ ಮನುಷ್ಯ ಅಸಹಾಯಕನೇ ಸರಿ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!