Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಮನುಷ್ಯ ಯಾವುದರ ಶಿಷ್ಯ? ಡಿವಿಜಿಯವರು ಕಗ್ಗದಲ್ಲಿ ಹೇಳಿದ ನಿಜಗುರು ಯಾರು ಗೊತ್ತೇನು? ಇದನ್ನು ಓದಿ.

ಮನುಷ್ಯ ಯಾವುದರ ಶಿಷ್ಯ? ಡಿವಿಜಿಯವರು ಕಗ್ಗದಲ್ಲಿ ಹೇಳಿದ ನಿಜಗುರು ಯಾರು ಗೊತ್ತೇನು? ಇದನ್ನು ಓದಿ.

ಮನುಷ್ಯ ಯಾವುದರ ಶಿಷ್ಯ?

ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ ಕಾಣಿಸುವರನ್ನವನು? ಹಸಿವವರ ಗುರುವು |
ಮಾನವನುಮಂತುದರ ಶಿಷ್ಯನವನಾ ರಸನೆ ನಾನಾವಯವಗಳಲಿ – ಮಂಕುತಿಮ್ಮ ||

ಆನೆ, ಇರುವೆ, ಕಾಗೆ, ಕಪ್ಪೆಗೆ ಅನ್ನವನು ಕಾಣಿಸುವವರು ಯಾರು? ಹಸಿವೇ ಅವುಗಳ ಗುರು, ಹಾಗೆಯೇ ಮಾನವನೂ ಕೂಡ ಹೊಟ್ಟೆಯ ಶಿಷ್ಯ. ಅವನ ನಾಲಿಗೆ ನಾನಾ ಅವಯವಗಳಲ್ಲಿ ಚಾಚಿಕೊಂಡಿರುತ್ತದೆ.

ಈ ಪ್ರಪಂಚದಲ್ಲಿ ಜನಿಸಿದ ಪ್ರತಿಯೊಂದು ಜೀವಿಯೂ ತನ್ನ ಆಹಾರವನ್ನು ತಾನೇ ಪಡೆಯುತ್ತದೆ. ಆನೆಗಾಗಲೀ, ಇರುವೆಗಾಗಲೀ, ಕಾಗೆಗಾಗಲೀ, ಕಪ್ಪರಗಾಗಲೀ ಊಟವನ್ನು ಯಾರೂ ತಂದು ಕೊಡುವುದಿಲ್ಲ. ಅವೇ ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತವೆ. ಅವುಗಳ ಹಸಿವೇ ಈ ವಿಷಯದಲ್ಲಿ ಅವುಗಳ ಗುರು. ಮಾನವನೂ ಕೂಡ ಹೊಟ್ಟೆಯ ಶಿಷ್ಯನೇ. ‘ಎಲ್ಲಾರೂ ಮಾಡುವುದು ಹೊಟ್ಟಗಾಗಿ ಗೇಣು ಬಟ್ಟೆಗಾಗಿ’ ಎಂದು ದಾಸರು ಹಾಡಿದರು. ಪ್ರಾಣಿಗಳು ಹೊಟ್ಟೆ ತುಂಬಿದರೇ ಅವು ಸುಮ್ಮನೆ ಮಲಗಿ ನಿದ್ರಿಸುತ್ತವೆ. ಮಾನವ ಮಾತ್ರ ಅವುಗಳಿಗಿಂತ ಭಿನ್ನವೇ ಆಗಿರುತ್ತಾನೆ. ಅವನಿಗೆ ನಾಲಿಗೆ ಒಂದೇ ಆಗಿದ್ದರೂ ನಾನಾ ಅವಯವಗಳಲ್ಲಿ ಅದು ಮೂಡಿ ಪ್ರಭಾವ ಬೀರುತ್ತದೆ. ಹೊಟ್ಟೆ ತುಂಬಿದರೆ ಸುಮ್ಮನಿರುವ ಪ್ರಾಣಿ ಅವನಲ್ಲ. ಯಾವುದಾದರೂ ಸುಂದರ ರೂಪವನ್ನು ನೋಡಿದಾಕ್ಷಣ ಅತ್ತಕಡೆ ಆಕರ್ಷಿತನಾಗುತ್ತಾನೆ. ಅವನ ಇಂದ್ರಿಯಗಳು ಕೇಳಿದ್ದನೆಲ್ಲಾ ಒದಗಿಸುವ ಪ್ರಯತ್ನ ಮಾಡುತ್ತಾನೆ. ಒಂದು ರೀತಿಯಲ್ಲಿ ಅವನ ಇಂದ್ರಿಯಗಳೆಲ್ಲಾ ನಾಲಿಗೆಗಳೇ ಆಗಿರುತ್ತವೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!