Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಯಾವುದು ಮೊದಲು ತಿದ್ದಬೇಕು ? ವಾಹ್ಹ್ ಡಿವಿಜಿಯವರು ಹೇಳಿರುವುದನ್ನು ಪ್ರತಿಯೊಬ್ಬರು ತಿದ್ದಿಕೊಳ್ಳಲು ಇದನ್ನೊಮ್ಮೆ ಓದಿ.

ಯಾವುದು ಮೊದಲು ತಿದ್ದಬೇಕು ? ವಾಹ್ಹ್ ಡಿವಿಜಿಯವರು ಹೇಳಿರುವುದನ್ನು ಪ್ರತಿಯೊಬ್ಬರು ತಿದ್ದಿಕೊಳ್ಳಲು ಇದನ್ನೊಮ್ಮೆ ಓದಿ.

ಯಾವುದು ಮೊದಲು ತಿದ್ದಬೇಕು ?

ತಿದ್ದಿಕೊಳೊ ನಿನ್ನ ನೀಂ ; ಜಗವತಿದ್ದುವುದಿರಲಿ ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು | ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ ಸ್ಪರ್ಧಿಯೆ ತ್ರಿ ವಿಕ್ರಮಗೆ ? – ಮಂಕುತಿಮ್ಮ ||

ನಿನ್ನನ್ನು ಮೊದಲು ನೀನು ತಿದ್ದಿಕೊ. ಜಗತ್ತನ್ನು ತಿದ್ದುವುದು ಇರಲಿ. ಈ ತಿದ್ದುವಿಕೆಗೊಂದು ಮಿತಿ ಇದೆ. ಎಂಬುದನ್ನು ಮರೆಯಬೇಡ. ಗರಡಿ ಮನೆಯ ವ್ಯಾಯಾಮದಿಂದ ನೀನು ಒಂದು ಬೆರಳಿನಷ್ಟು ಉದ್ದ ಮಾತ್ರ ಬೆಳೆಯಬಹುದು. ಆದರೆ ನೀನು ವಾಮನನಿಗೆ ಸ್ಪರ್ಧಿಯಾಗಲು ಸಾಧ್ಯವೇ ?

ಲೋಕದ ಜನ ಸದಾ ಇತರರನ್ನು ತಿದ್ದಲು ಪ್ರಯತ್ನಿಸುತ್ತಿರುತ್ತಾರೆ. ಡಿವಿಜಿಯವರು ಇಲ್ಲಿ ‘ನಿನ್ನನ್ನು ನೀನು ಮೊದಲು ತಿದ್ದಿಕೋ, ಲೋಕವನ್ನು ತಿದ್ದುವ ವಿಚಾರ ಹಾಗಿರಲಿ’ ಎಂದು ಸೂಚಿಸುತ್ತಾರೆ. ಪರೋಪದೇಶ ವಿಚಾರದಲ್ಲಿ ಎಲ್ಲರೂ ಪಾಂಡಿತ್ಯ ಪ್ರದರ್ಶನವನ್ನು ಮಾಡುತ್ತಾರೆ. ತಮ್ಮ ಬಗ್ಗೆ, ತಮ್ಮ ದೋಷಗಳ ಬಗ್ಗೆ ಗಮನ ಹರಿಸುವುದೇ ಇಲ್ಲ. ಪ್ರತಿಯೊಬ್ಬನೂ ತನ್ನನ್ನು ತಿದ್ದಿಕೊಂಡರೆ ಸಾಕು. ಜಗತ್ತು ಬದಲಾಗಿ ಬಿಡುತ್ತದೆ. ಬದಲಾವಣೆಗಳು ವ್ಯಕ್ತಿ ಕೇಂದ್ರಿತವಾಗಿದ್ದರೆ ಸಮಾಜದ ಪರಿವರ್ತನೆ ಸುಲಭ. ತಮ್ಮ ದೋಷವನ್ನು ಮರೆಮಾಚಿ ಪ್ರತಿಯೊಬ್ಬನೂ ಇತರರನ್ನು ತಿದ್ದಹೊರಟರೆ ಯಾರು ತಿದ್ದಿಕೊಳ್ಳಲಾರರು. ಈ ತಿದ್ದಿವಿಕೆಗೊಂದು ಮಿತಿಯಿರುತ್ತದೆ. ಅದನ್ನು ಮರೆಯಬೇಡ. ಗರಡಿ ಮನೆಗೆ ಹೋಗಿ ಬಹಳ ವರ್ಷ ವ್ಯಾಯಾಮ ಮಾಡಿದರೂ ಅದರ ಫಲವಾಗಿ ಒಂದು ಬೆರಳಿನಷ್ಟು ಉದ್ದ ಮಾತ್ರ ಬೆಳೆಯಬಹುದು. ವಾಮನ ಎತ್ತರದಲ್ಲಿ ಕುಬ್ಜ ಆದರೆ ಬಲಿಯನ್ನು ನಿಗ್ರಹಿಸುವಾಗ ಅವನ ಪಾದಗಳು ಬೃಹದಾಕಾರದಲ್ಲಿ ಬೆಳೆದವು. ಎಷ್ಟೇ ನೀನು ಶಾರೀರಿಕವಾಗಿ ತಿದ್ದಿಕೊಳ್ಳಬಹುದು. ಆದರೆ ಆ ವಾಮನನಿಗೆ ಸ್ಪರ್ಧೆಯೊಡ್ಡಲು ಸಾಧ್ಯವೇ? ನಿನ್ನ ಮಿತಿ ಅರಿತು ವ್ಯವಹರಿಸು.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!