Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಸ್ವತಂತ್ರ ಸುಖ ಎಂತಿರಬೇಕು ? ಡಿವಿಜಿಯವರು ಸುಖದ ಬಗ್ಗೆ ಎಂಥಾ ಮಾತು ಹೇಳಿದ್ದಾರೆ ಒಮ್ಮೆ ಓದಿ

ಸ್ವತಂತ್ರ ಸುಖ ಎಂತಿರಬೇಕು ? ಡಿವಿಜಿಯವರು ಸುಖದ ಬಗ್ಗೆ ಎಂಥಾ ಮಾತು ಹೇಳಿದ್ದಾರೆ ಒಮ್ಮೆ ಓದಿ

ಸ್ವತಂತ್ರ ಸುಖ ಎಂತಿರಬೇಕು ?

ಎಸಳಿನಡಿ ಗಿಡದ ಬಿಗಿ, ಮೇಲೆ ಗಾಳಿಯ ಸರಸ ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ |
ಕುಶಲ ಸೌರಭವ ನಿರ್ಯತ್ನ ಸ್ವತಂತ್ರ ದಿಂ ಪಸರಿಪಾ ನಯ ಸುಖವೊ – ಮಂಕುತಿಮ್ಮ ||

ದಳದ ಬುಡದಲ್ಲಿ ಗಿಡದ ಹಿಡಿತವಿದ್ದು, ಮೇಲೆ ಗಾಳಿಯ ಸರಸವಿರುತ್ತದೆ. ಆ ಹಿಡಿತ ಮುಕ್ತತೆಗಳಿಂದಲೇ ಹೂವಿಗೆ ಕ್ಷೇಮ. ಆಗ ಪ್ರಯತ್ನವಿಲ್ಲದೇ ಸ್ವತಂತ್ರವಾಗಿ, ಚಾತುರ್ಯದಿಂದ ಅದರ ಸುವಾಸನೆ ಹರಡಿತ್ತದೆ. ಈ ರೀತಿಯೇ ಸುಖವನ್ನು ಕೊಡುತ್ತದೆ.

ಮಾನ್ಯ ಡಿವಿಜಿಯವರು ಇಲ್ಲಿ ಹೂವಿನ ಉದಾಹರಣೆಯೊಂದಿಗೆ ಬದುಕಿನಲ್ಲಿ ಬಂಧನ, ಸ್ವಾತಂತ್ರ್ಯ ಎರಡರ ಅಗತ್ಯವೂ ಇರುತ್ತದೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಹೂವಿನ ಎಸಳಿಗೆ ಅದರ ಮೂಲದಲ್ಲಿ ಗಿಡದ ಬಂಧನವಿರುತ್ತದೆ. ಮೇಲೆ ಮುಕ್ತವಾಗಿರುತ್ತದೆ. ಗಾಳಿ ಆ ದಳಗಳ ಮೇಲೆ ಬೀಸಿದಾಗ ಅದರ ಸುವಾಸನೆ ಎಲ್ಲೆಡೆ ಹರಡುತ್ತದೆ. ಆ ಎಸಳುಗಳಿಗೆ ಗಿಡದ ಬಿಗಿತ ಇಲ್ಲದಿರುತ್ತಿದ್ದರೆ, ಅವು ಗಾಳಿಯ ಜೊತೆಯಲ್ಲಿಯೇ ಹಾರಿ ಎಲ್ಲಿಯೋ ಬಿದ್ದುಬಿಡುತ್ತಿದ್ದವು. ಹೀಗೆ ಒಂದು ಕಡೆ ಬಿಗಿತ ಇನ್ನೊಂದು ಕಡೆ ಬಿಡುತ್ತೆ ಇವೆರಡು ಇದ್ದಾಗ ಗಾಳಿಯ ಸಹವಾಸದಿಂದ ಸುವಾಸನೆ ಅನಾಯಾಸವಾಗಿ, ಸ್ವತಂತ್ರವಾಗಿ ಎಲ್ಲೆಡೆ ಹರಡುತ್ತದೆ. ಬದುಕಿನಲ್ಲಿ ಅಂತಹ ಕುಶಲವಾದ ನಾಜೂಕಿನ ನಡೆ ಸುಖವನ್ನು ನೀಡುತ್ತದೆ. ಅತಿಯಾದ ಬಂಧನ ಸುಖವನ್ನು ನೀಡಲಾರದು. ಅತಿಯಾದ ಸ್ವಾತಂತ್ರ್ಯವೂ ಸುಖಕರವಾಗಲಾರದು. ಗಾಳಿಪಟಕ್ಕೆ ಒಂದೆಡೆ ಸೂತ್ರದ ಬಂಧನವಿರುತ್ತದೆ. ಇನ್ನೊಂದು ಕಡೆ ಗಾಳಿಯ ಸ್ಪಂದನವಿರುತ್ತದೆ. ಗಾಳಿಪಟ ಆಗಸದಲ್ಲಿ ಮಿಂಚುತ್ತದೆ. ಹುಟ್ಟು ಸಾವುಗಳಿಂದ ಕೂಡಿದ ನಮ್ಮ ಬದುಕೂ ಅಂತೆಯೇ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!