Saturday, July 12, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಯಾವುದು ಜಾಣತನ? ಮನುಷ್ಯನ ಸ್ವಭಾವದಲ್ಲಿ ಜಾಣತನ ಯಾವುದೆಂದು ಡಿವಿಜಿಯವರು ಏನೇಳಿದ್ದಾರೆ? ಒಮ್ಮೆ ಓದಿ.

ಯಾವುದು ಜಾಣತನ? ಮನುಷ್ಯನ ಸ್ವಭಾವದಲ್ಲಿ ಜಾಣತನ ಯಾವುದೆಂದು ಡಿವಿಜಿಯವರು ಏನೇಳಿದ್ದಾರೆ? ಒಮ್ಮೆ ಓದಿ.

ಯಾವುದು ಜಾಣತನ?

ಹುಲಿಯ ಕೆಣಕುವುದು ಹುಲಿ ; ಕಪಿಯನಣಕಿಪುದು ಕಪಿ ಹುಲಿಕಪಿಗಳವಿತಿರದ ನರಜಂತುವೆಲ್ಲಿ ? ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು ಕುಲುಕದಿರು ಬಾಲವನ – ಮಂಕುತಿಮ್ಮ ||

ಹುಲಿಯನ್ನು ಹುಲಿ ಕೆಣಕುತ್ತದೆ. ಕಪಿ, ಕಪಿಯನ್ನು ಅಣಕಿಸುತ್ತದೆ. ಹುಲಿಕಪಿಗಳು ಅಡಗಿಕೊಂಡಿರದ ನರಪ್ರಾಣಿ ಎಲ್ಲಿ? ಮಲಗಿದ್ದ ಪ್ರಾಣಿಯನ್ನು ಹಾಗೇ ಮಲಗಲು ಬಿಡುವುದೇ ಜಾಣತನ. ಅದರ ಬಾಲವನ್ನು ಕುಲುಕಿ ಕೆಣಕಬೇಡ.

ಹುಲಿಯನ್ನು ಕೆಣಕುವುದಕ್ಕೆ ಹುಲಿಯೇ ಸರಿ. ಬೇರೊಂದು ಪ್ರಾಣಿ ಅದನ್ನು ಕೆಣಕಲಾರದು. ಹಾಗೆಯೇ ಕೋತಿಯನ್ನು ಅಣಕಿಸುವುದಕ್ಕೆ ಕೋತಿಯೇ ಆಗಬೇಕು. ಅಣಕದಲ್ಲಿ ಕೋತಿಯಷ್ಟು ನೈಪುಣ್ಯ ಪಡೆದ ಪ್ರಾಣಿ ಬೇರೊಂದಿಲ್ಲ. ಅದರೆ ಮನುಷ್ಯನಲ್ಲಿ ಹುಲಿ ಕಪಿಗಳೆರಡು ಅವಿತುಕೊಂಡಿವೆ. ಏಕೆಂದರೆ ಹುಲಿಯಂತೆ ಇತರರನ್ನು ಕೆಣಕುವ ಬುದ್ಧಿಯಂತೆ ಇನ್ನೊಬ್ಬರನ್ನು ಅಣಕಿಸುವ ಸ್ವಭಾವವೂ ಇದೆ. ಆದರೆ ಕೆಣಕುವುದಾಗಲಿ, ಅಣಕಿಸುವುದಾಗಲಿ ಒಳ್ಳೆಯ ಸ್ವಭಾವವಲ್ಲ. ಅದು ಕೆಲವೊಮ್ಮೆ ತಿರುಗುಬಾಣವಾಗಿ ಚುಚ್ಚುವ ಸಂಭವವೂ ಇರುತ್ತದೆ. ಆದ್ದರಿಂದ ಮಲಗಿ ನಿದ್ರಿಸುತ್ತಿರುವ ಮೃಗವನ್ನು ಹಾಗೆಯೇ ಇರಲು ಬಿಡುವುದು ಜಾಣತನ. ಹಾಗೆ ಮಾಡದೆ ಅದರ ಬಾಲವನ್ನು ಕುಲಕಲು ಹೋದರೆ ಅಪಾಯವನ್ನು ಬರಮಾಡಿಕೊಂಡಂತೆಯೇ ಸರಿ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!