Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಆತ್ಮೋದ್ಧಾರ ಆಗುವುದೆಂದು ? ಇಂದಿನ ರಾಜಕಾರಣಿಗಳಿಗೆ ಡಿವಿಜಿಯವರ ಎಂತಾ ಪ್ರಶ್ನೆ?

ಆತ್ಮೋದ್ಧಾರ ಆಗುವುದೆಂದು ? ಇಂದಿನ ರಾಜಕಾರಣಿಗಳಿಗೆ ಡಿವಿಜಿಯವರ ಎಂತಾ ಪ್ರಶ್ನೆ?

ಆತ್ಮೋದ್ಧಾರ ಆಗುವುದೆಂದು ?

ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ |
ಉದ್ಧರಿಸುವೆನು ಜಗವೆನೆನ್ನುತಿಹಸಖನೆ ನಿನ್ನುದ್ಧಾರವೆಷ್ಟಾಯ್ತೋ ? ಮಂಕುತಿಮ್ಮ ||

ಎದ್ದು ಎದ್ದು ಬೀಳುತ್ತಿಯೆ, ಗುದ್ದಾಡಿ ಸೋಲುತ್ತೀಯೆ, ಗದ್ದಲವನ್ನು ತುಂಬಿ ಪ್ರಸಿದ್ಧನಾಗುತ್ತೀಯೆ. ಜಗತ್ತನ್ನು ಉದ್ದರಿಸುತ್ತೇನೆ ಎನ್ನುತ್ತೀಯೆ, ಗೆಳೆಯ, ನಿನ್ನ ಉದ್ದಾರ ಎಷ್ಟಾಯ್ತು ಎಂದು ಚಿಂತಿಸಿದ್ದೀಯೇನು ?

ಇಂದಿನ ರಾಜಕಾರಣಿಗಳಿಗೆ ಡಿ.ವಿ.ಗುಂಡಪ್ಪನವರು ಅಂದೇ ಪ್ರಶ್ನಿಸಿದ್ದಾರೆ. ಚುನಾವಣೆಗೆ ನಿಲ್ಲುತ್ತಾರೆ. ಗೆದ್ದವರು ಸೋಲುತ್ತಾರೆ. ಸೋತವರು ಗೆಲ್ಲುತ್ತಾರೆ. ಏಳುಬೀಳುಗಳು ಅವರ ಬದುಕಿನಲ್ಲಿ ನಿರಂತರ. ಅಧಿಕಾರಕ್ಕಾಗಿ ಕಚ್ಚಾಡುತ್ತಾರೆ. ಗುದ್ದಾಟ ಬಡಿದಾಟಗಳು ನಡೆಯುತ್ತಲೇ ಇರುತ್ತವೆ. ಜನಗಳ ಮಧ್ಯದಲ್ಲಿ ವಿಷಬೀಜವನ್ನು ಬಿತ್ತಿ ಅವರು ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಿ ತಾನು ಅವರನ್ನು ಸಮಾಧಾನ ಮಾಡಿದಂತೆ ನಟಿಸಿ ಪ್ರಸಿದ್ದರಾಗುತ್ತಾರೆ. ಮಾತೆತ್ತಿದ್ದರೆ ಜಗತ್ತಿನ ಉದ್ದಾರದ ಅಮೃತ ನುಡಿ ಬಿಂದುಗಳು ಅವರಿಂದ ಹೊರಹೊಮ್ಮುತ್ತಿರುತ್ತವೆ. ಬಾಹ್ಯ ಪ್ರಪಂಚಕ್ಕೆ ನಿರಂತರ ಅಂಟಿಕೊಂಡ ಅದೇ ಸರ್ವಸ್ವವೆಂದು ತಿಳಿದುಕೊಂಡು ಹೋರಾಡುತ್ತಾರೆ. ಗುಂಡಪ್ಪ ಪ್ರಶ್ನಿಸುತ್ತಾರೆ. ‘ ಸಖನೇ, ನಿನ್ನ ಆತ್ಮದ ಉದ್ಧಾರ ಇದರಿಂದ ಎಷ್ಟಾಯ್ತು?’ ಮನುಷ್ಯ ಜನ್ಮ ಶ್ರೇಷ್ಠವಾದ ಜನ್ಮ ಭಗವಂತ ನಮಗೆ ವಿವೇಕವನ್ನು ಕೊಟ್ಟಿದ್ದಾನೆ. ಈ ನಶ್ವರ ದೇಹದಿಂದ ಅನಶ್ವರವಾದುದನ್ನು ಉಳಿಸಿ ಹೋಗಬೇಕಾದುದು ನಮ್ಮ ಬದುಕಿನ ತಿರುಳು. ಸಂಪಾದಿಸಿದ ಹಣ, ಆಸ್ತಿ ಇವೆಲ್ಲ ಅಳಿದು ಹೋಗುವಂಥವು. ಸೇವೆ, ತ್ಯಾಗ, ದಾನ, ಒಳ್ಳೆಯ ಕಾರ್ಯಗಳು ಮನುಷ್ಯನ ಹುಟ್ಟುನ್ನು ಸಾರ್ಥಕಗೊಳಿಸುತ್ತವೆ. ಇವು ಮನುಷ್ಯನಿಗೆ ಅಮೃತತ್ವವನ್ನು ನೀಡುತ್ತವೆ. ಇದರಿಂದಲೇ ಆತ್ಮೋದ್ಧಾರ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!