Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಕೊಳೆಗೂ ಬೆಲೆಯುಂಟೇ? ಡಿವಿಜಿಯವರ ಈ ಕಗ್ಗದಲ್ಲಿ ಕಲಿಯಬೇಕಾಗಿದ್ದು ಏನು ಗೊತ್ತೇ?

ಕೊಳೆಗೂ ಬೆಲೆಯುಂಟೇ? ಡಿವಿಜಿಯವರ ಈ ಕಗ್ಗದಲ್ಲಿ ಕಲಿಯಬೇಕಾಗಿದ್ದು ಏನು ಗೊತ್ತೇ?

ಕೊಳೆಗೂ ಬೆಲೆಯುಂಟೇ?

ಕೊಳಕೆಂದು ಹುಳುಕೆಂದು ಹೇಸಿಗೆಯ ಹುಳುವೆಂದು ಇಳೆಯೊಳಾವುದರೊಮಸಹ್ಯ ಪಡಬೇಡ |
ಬೆಲೆಯುಂಟು ಕೊಳೆಗಮೀಜೀವಸಾಮಗ್ರಿಯಲಿ ಕೊಳೆಶುಚಿಖ್ಯಾಪಕವೊ – ಮಂಕುತಿಮ್ಮ ||

ಈ ಭೂಮಿಯಲ್ಲಿ ಯಾವುದನ್ನು ಕೊಳಕು, ಹುಳುಕು, ಹೇಸಿಗೆಯ ಹುಳು ಎಂದು ತಿಳಿದು ಅಸಹ್ಯ ಪಡಬೇಡ. ಈ ಜೀವ ಸಾಮಾಗ್ರಿಯಲ್ಲಿ ಕೊಳೆಗೂ ಬೆಲೆಯಿದೆ. ಏಕೆಂದರೆ ಕೊಳೆಯೇ ಶುಚಿಯಾದುದನ್ನು ಬೆಳಕಿಗೆ ತರುವಂಥದ್ದು.

ಈ ಜಗತ್ತಿನಲ್ಲಿ ಭಗವಂತ ಸ್ಪಷ್ಟಿಸಿದ ಪ್ರತಿಯೊಂದು ವಸ್ತುವಿಗೂ ಒಂದು ಅರ್ಥವಿದೆ. ಅವನ ದೃಷ್ಟಿಯಲ್ಲಿ ಯಾವುದೂ ವ್ಯರ್ಥವಲ್ಲ. ಬೆಟ್ಟದಲ್ಲಿ ಮಲ್ಲಿಗೆ ಅರಳಿ ಸುವಾಸನೆಯನ್ನು ಹರಡಿದರೆ ಕೊಚ್ಚೆಯಲ್ಲಿ ಕಮಲ ಅರಳಿ ಸೊಬಗನ್ನು ಪಸರಿಸುತ್ತದೆ. ಹೂವು ಮುಳ್ಳು, ಕಲ್ಲು ಮಣ್ಣು, ಬೆಟ್ಟ ಕಣಿವೆಗಳು, ನದಿ ಕೊಳಗಳು ಹೀಗೆ ಸೃಷ್ಟಿಯ ವೈಪರೀತ್ಯಗಳು ಬಹಳ. ಸೂರ್ಯೋದಯ ಒಂದು ಕಡೆಯಾದರೆ ಸೂರ್ಯಸ್ತದ ದೃಶ್ಯ ಇನ್ನೊಂದೆಡೆ. ಪ್ರೇಮಘೋರಗಳು ಭಗವಂತನ ದೃಷ್ಟಿಯಲ್ಲಿ ಒಂದೇ. ಕೆಲವೊಮ್ಮೆ ನಾವು ಕೊಳಕನ್ನು ಕಂಡು ಅಸಹ್ಯಪಟ್ಟುಕೊಳ್ಳುತ್ತೇವೆ. ಗುಂಡಪ್ಪನವರು ಇದು ಕೊಳಕು, ಇದು ಹುಳುಕು, ಇದು ಹೇಸಿಗೆಯ ಹುಳವೆಂದು ಯಾವುದರಲ್ಲಿಯೂ ಅಸಹ್ಯಪಟ್ಟುಕೊಳ್ಳಬೇಡ ಎಂದು ಇಲ್ಲಿ ಸೂಚಿಸಿದ್ದಾರೆ. ಕಾರಣ ಈ ಭೂಮಿಯಲ್ಲಿ ಕೊಳೆಗೂ ಬೆಲೆಯಿದೆ. ಅವೆಲ್ಲವೂ ಜೀವಸಾಮಗ್ರಿಗಳು, ಕೊಳೆ ಶುಚಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಕೋಗಿಲೆಯ ಇಂಪು ಕಾಗೆಯ ಧ್ವನಿಯಿಂದ ನಿರ್ಧಾರಿತವಾಗುತ್ತದೆ. ಬುದ್ಧಿವಂತನ ಬುದ್ಧಿಮತ್ತೆಯನ್ನು ಅಳೆಯುವ ಮಾಪದಂಡ ದಡ್ಡರ ದಡ್ಡತನ. ಕೊಳೆಯ ನೀರನ್ನು ಉಪಯೋಗಿಸಿಕೊಂಡು ತೆಂಗಿನ ಮರ ಮಧುಮಧುರವಾದ ನೀರನ್ನು ಕೊಡುತ್ತದೆ. ಆದ್ದರಿಂದ ಈ ಜಗತ್ತಿನಲ್ಲಿ ಎಲ್ಲವೂ ಮಧುರವೇ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!