Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಬಿಡುಗಡೆಗೆ ದಾರಿ ಯಾವುದು ? ಡಿವಿಜಿಯವರ ಈ ಕಗ್ಗ ಓದಲೇಬೇಕು.

ಬಿಡುಗಡೆಗೆ ದಾರಿ ಯಾವುದು ? ಡಿವಿಜಿಯವರ ಈ ಕಗ್ಗ ಓದಲೇಬೇಕು.

ಬಿಡುಗಡೆಗೆ ದಾರಿ ಯಾವುದು ?

ಎಡರು ತೊಡರೆನಲೇಕೆ ? ಬಿಡಿಸುಮತಿಗಾದನಿತ ದುಡಿ ಕೈಯಿನಾದನಿತು, ಪಡು ಬಂದ ಪಾಡು ಬಿಡುಮಿಕ್ಕುದನು ವಿಧಿಗೆ, ಬಿಡದಿರುಪಶಾಂತಿಯನು ಬಿಡುಗಡೆಗೆ ದಾರಿಯದು – ಮಂಕುತಿಮ್ಮ ||

ಬದುಕಿನಲ್ಲಿ ಅಡ್ಡಿ ಅಡಚಣೆಗಳು ಇವೆ ಅಂದುಕೊಳ್ಳುವುದೇಕೆ? ಬುದ್ಧಿಯನ್ನು ಉಪಯೋಗಿಸಿಕೊಂಡು ಸಾಧ್ಯವಾದಷ್ಟು ಬಿಡಿಸಿಕೋ, ಕೈಲಾದಷ್ಟು ದುಡಿ, ಬಂದುದನ್ನು ಅನುಭವಿಸು. ಉಳಿದುದ್ದನ್ನು ವಿಧಿಗೆ ಬಿಟ್ಟುಬಿಡು‌. ಶಾಂತಿಯನ್ನು ಮಾತ್ರ ಕಳೆದುಕೊಳ್ಳಬೇಡ. ಅದೇ ಬಿಡುಗಡೆಗೆ ದಾರಿ.

ಜೀವನದಲ್ಲಿ ಸುಖ ದುಃಖಗಳು ಲಾಭ ನಷ್ಟಗಳು ಜಯಾಪಜಯಗಳು ಸ್ವಾಭಾವಿಕವಾದವುಗಳು. ಒಬ್ಬನಿಗೆ ಜಯವಾದರೆ ಇನ್ನೊಬ್ಬರಿಗೆ ಅಪಜಯವಾಗಲೇಬೇಕು. ಒಮ್ಮೆ ಸುಖ, ಮತ್ತೊಮ್ಮೆ ದುಃಖ. ಜ್ಞಾನಿಯಾದವನು ಎಲ್ಲವನ್ನೂ ಸಮಾನಾಗಿ ಕಾಣುತ್ತಾನೆ.

“ದುಃಖೇಷ್ವನುದ್ವಿಗ್ನಮನಾಃಸುಖೇಷು ವಿಗತಸ್ತೃಹಃ |
ವೀತತರಾಗಭಯ ಕ್ರೋಧಃ ಸ್ಥಿತಧೀರ್ಮುನಿರುಚ್ಯತೇ”||

ದುಃಖ ಬಂದಾಗ ಉದ್ವೇಗ ಕೊಳಗಾಗದೆ, ಸುಖ ಬಂದಾಗ ಅದಕ್ಕಾಗಿ ಆಸೆ ಪಡದೆ, ಅನುರಾಗ, ಭಯ, ಕೋಪ ಇವುಗಳನ್ನೆಲ್ಲ ಪರಿತ್ಯಜಿಸಿದವನೇ ನಿಜವಾದ ಜ್ಞಾನಿ ಎಂದು ಗೀತೆ ಸಾರುತ್ತದೆ. ಜಗತ್ತಿನ ಗೊಂದಲಗಳಿಂದ ಬಿಡುಗಡೆಯನ್ನು ನಾವು ಹೇಗೆ ಹೊಂದಬೇಕು ಎಂಬುದನ್ನು ಡಿವಿಜಿ ಮೇಲಿನ ಪದ್ಯದಲ್ಲಿ ಸೂಚಿಸಿದ್ದಾರೆ. ಕಷ್ಟಗಳ ಬಗ್ಗೆ ಹೆಚ್ಚು ಚಿಂತಿಸಬೇಡ, ಸಾಧ್ಯವಾದಷ್ಟು ಅವುಗಳನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸು, ಯಥಾ ಶಕ್ತಿ ದುಡಿಯುತ್ತಿರು. ಬಂದದ್ದನ್ನೆಲ್ಲ ಅನುಭವಿಸು. ಉಳಿದುದನ್ನು ವಿಧಿಗೆ ಬಿಟ್ಟುಬಿಡು. ಆದರೆ ಎಂದೂ ಮನಸ್ಸಿನ ಶಾಂತಿಯನ್ನು ಮಾತ್ರ ಕಳೆದುಕೊಳ್ಳಬೇಡ. ಅದೇ ಮುಂದೆ ಬಿಡುಗಡೆಗೆ ದಾರಿಯಾಗುತ್ತದೆ. ಮನಸ್ಸಿನಲ್ಲಿ ಶಾಂತಿ ಇದ್ದರೆ ಮಾತ್ರ ಮೈಯಲ್ಲಿ ಕಾಂತಿ ಅಲ್ಲವೇ?

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!