ಪಿತೃಪಕ್ಷದಲ್ಲಿ ತುಂಗಭದ್ರೆಗೆ ಬಾಗಿನ ಅರ್ಪಣೆ ! ಭ್ರಷ್ಟ ಸರ್ಕಾರದ ಅವನತಿ ಮುನ್ಸೂಚನೆ : ಬಿಜೆಪಿ ಟೀಕೆ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹೊಸಪೇಟೆ.
ಸಿಎಂ ಸಿದ್ದರಾಮಯ್ಯ ತುಂಗಭದ್ರೆಗೆ ಬಾಗಿನ ಅರ್ಪಿಸಿದ ಬೆನ್ನಲ್ಲೇ ಸಿಎಂ ವಿರುದ್ಧ ಬಿಜೆಪಿ ಟೀಕೆ ಮಾಡಿದೆ.
ಈಗಾಗಲೇ ಮುನಿಸಿದ್ದ ತಾಯಿ ತುಂಗಭದ್ರೆ ಶಾಂತಳಾಗಿ ಮತ್ತೋಮ್ಮೆ ಮೈದುಂಬಿರುವುದು ವಿಜಯನಗರ ಜನತೆಗೆ ಹರ್ಷ ತಂದಿದೆ. ವಿಜಯನಗರದ ಹೆಮ್ಮೆ ತುಂಗಭದ್ರಾ ಜಲಾಶಯ. ಆದರೆ ಸನಾತನ ಹಿಂದು ಧರ್ಮದ ಪ್ರಕಾರ ಪಿತೃಪಕ್ಷದಲ್ಲಿ ಯಾವುದೇ ಶುಭಕಾರ್ಯಗಳನ್ನು ನಡೆಸುವುದಿಲ್ಲ. ಸಿಎಂ ಸಿದ್ದರಾಮಯ್ಯ ಪಿತೃಪಕ್ಷದಲ್ಲಿ ಬಾಗಿನ ಅರ್ಪಿಸಿ ತುಂಗಭದ್ರೆಯ ಅವಕೃಪೆಗೆ ಪಾತ್ರರಾಗಿದ್ದಾರೆ.
ಭ್ರಷ್ಟಾಚಾರದಲ್ಲಿ ತೊಡಗಿರೋ ಕಾಂಗ್ರೆಸ್ ಸರ್ಕಾರದ ಅವನತಿಗೆ ತುಂಗಭದ್ರೆ ಕಾರಣವಾಗ್ತಾಳೆ ಎಂದು ವಿಜಯನಗರದ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಭವಿಷ್ಯ ನುಡಿದಿದ್ದಾರೆ.