Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಬರೆದ ಸುದ್ದಿಯ ಚಿಂತೆ ಅಂಚೆಯವನಿಗೇಕೆ? ಡಿವಿಜಿಯವರ ಈ ಕಗ್ಗ ನೀವು ಓದಲೇಬೇಕು.

ಬರೆದ ಸುದ್ದಿಯ ಚಿಂತೆ ಅಂಚೆಯವನಿಗೇಕೆ? ಡಿವಿಜಿಯವರ ಈ ಕಗ್ಗ ನೀವು ಓದಲೇಬೇಕು.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನಿತ್ಯ ಕಗ್ಗದ ಬೆಳಕು.

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ?
ಓಲೆಗಳನವರವರಿಗೈದಿಸಿರೆ ಸಾಕು
ಸಾಲಗಳೊ, ಶೂಲಗಳೊ, ನೋವುಗಳೋ, ನಗವುಗಳೋ ಕಾಲೋಟವವನೂಟ – ಮಂಕುತಿಮ್ಮ ||

ಅಂಚೆಯವನಿಗೆ ಬರೆದ ಸುದ್ದಿಯ ಚಿಂತೆ ಏಕೆ? ಪತ್ರಗಳನ್ನು ಅವರವರಿಗೆ ತಲುಪಿಸಿದರೆ ಸಾಕು ಸಾಲಗಳ ಸುದ್ದಿಯು ವೇದನೆಗಳ ಸುದ್ದಿಯು ನೋವುಗಳ ಸುದ್ದಿಯೋ ಸಂತೋಷದ ಸುದ್ದಿಯೋ ಯಾವುದು ಅವನಿಗೆ ಸಂಬಂಧವಿಲ್ಲ ಅವನ ಕಾಲುಗಳ ಓಟವೇ ಅವನ ಊಟ.

ಅಂಚೆಯವನು ಓಲೆಗಳನ್ನು ಅದರ ಮೇಲಿರುವ ಗೃಹ ಸಂಕೇತಕ್ಕನುಗುಣವಾಗಿ ಅವರವರಿಗೆ ಹಂಚಿ ಬಿಡಬೇಕು. ಅದು ಅವನ ಕೆಲಸ. ಆ ಪತ್ರದ ಒಳಗಿರುವ ಸುದ್ದಿಗಳ ಚಿಂತೆ ಅವನನ್ನು ಕಾಡದು. ಅದರಲ್ಲಿ ಸಾಲದ ಸುದ್ದಿಯೋ, ನೋವಿನ ಸುದ್ದಿಯೋ, ನಲಿವಿನ ಸುದ್ದಿಯೋ, ಯಾವುದು ಇರಬಹುದು. ಅದಕ್ಕೂ ಅವನಿಗೂ ಸಂಬಂಧವಿಲ್ಲ. ಮನೆಯಿಂದ ಮನೆಗೆ ಅವನು ಓಡುತ್ತಿರಬೇಕಷ್ಟೆ. ಆ ಕೆಲಸವೇ ಅವನಿಗೆ ಊಟವನ್ನು ಒದಗಿಸುತ್ತದೆ. ಅದರಂತೆ ಈ ಭೂಮಿಯಲ್ಲಿ ನಾವೆಲ್ಲ ಅಂಚೆಯವನಂತೆ. ಬದುಕನ್ನು ಕೆದಕಿ ನೋಡುವ ಅಗತ್ಯವಿಲ್ಲ. ಬದುಕಿನ ಸಾಗರದಲ್ಲಿ ತೆಲುತ್ತಾ ಸಾಗಬೇಕು ಮುಳುಗಿದರೆ ಆಪತ್ತು. ಭಗವಂತ ನಮ್ಮನ್ನು ಭೂಮಿಗೆ ಒಂದಷ್ಟು ಕೆಲಸ ಮಾಡಲು ಕಳುಹಿಸಿದ್ದಾನೆ ಅದನ್ನು ಪ್ರಾಮಾಣಿಕವಾಗಿ ಮಾಡುತ್ತ ಸಾಗಬೇಕು. ಅದನ್ನು ಮಾಡುತ್ತ ಸಾಗಿದರೆ ನಮಗೆ ಯಾವ ಕೊರತೆಯೂ ಉಂಟಾಗದು. ನೆನಪಿರಲಿ, ನಮ್ಮದು ಅಂಚೆಯವನ ಪಾತ್ರ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!