Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಬದುಕು ಹೇಗಿದ್ದರೆ ಚೆನ್ನ? ಡಿವಿಜಿಯವರ ಕಗ್ಗದಲ್ಲಿ ಏನೇಳಿದ್ದಾರೆ ಗೊತ್ತೇ?

ಬದುಕು ಹೇಗಿದ್ದರೆ ಚೆನ್ನ? ಡಿವಿಜಿಯವರ ಕಗ್ಗದಲ್ಲಿ ಏನೇಳಿದ್ದಾರೆ ಗೊತ್ತೇ?

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನಿತ್ಯ ಕಗ್ಗದ ಬೆಳಕು.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣುಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ ಹೊರಡು ಕರೆ ಬರಲಳದೆ – ಮಂಕುತಿಮ್ಮ||

ನಿನಗೆ ಇರುವ ಕೆಲಸವನ್ನು ಸಣ್ಣ ಕೆಲಸವೆಂದು ಭಾವಿಸದೆ ಮನಸ್ಸಿಟ್ಟು ಮಾಡು. ಸಿಕ್ಕಿದ್ದುದನ್ನು ಪ್ರಸಾದವೆಂದು ತಿಳಿದು ಗೊಣಗದೆ ಊಟ ಮಾಡು. ಜೀವನದ ಪರಮ ಪ್ರಯೋಜನವನ್ನು ಬಿಡದೆ ಲೋಕದ ಭಾರವನ್ನು ಹೊತ್ತುಕೋ. ಕರೆ ಬಂದ ತಕ್ಷಣ ದುಃಖಿಸದೆ ಹೊರಟುಬಿಡು.

‘ತಲ್ಲಣಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನ್ನು ಇದಕ್ಕೆ ಸಂಶಯವಿಲ್ಲ’ ದಾಸರು ಹೇಳುವಂತೆ ಭಗವಂತ ಈ ಭೂಮಿಯ ಮೇಲೆ ಹುಟ್ಟಿಸಿದ ಮೇಲೆ ಎಲ್ಲರನ್ನೂ ಸಮಾನವಾಗಿ ಸಲಹುತ್ತಾನೆ. ಎಲ್ಲರಿಗೂ ಒಂದು ಕೆಲಸ ಕೊಟ್ಟಿರುತ್ತಾನೆ. ಆದ್ದರಿಂದ ಭಗವಂತ ಯಾವ ಕೆಲಸವನ್ನು ನಮಗೆ ಒದಗಿಸಿ ಕೊಟ್ಟಿದ್ದಾನೋ ಅದನ್ನು ಸಂತೃಪ್ತಿಯಿಂದ ಮಾಡುವ ಪ್ರವೃತ್ತಿ ನಮ್ಮದಾಗಬೇಕು ‘ಸಣ್ಣ ಕೆಲಸ ಇದು’ ಎಂದು ಗೊಣಗಬೇಡ, ಸೇವಕನ ಕೆಲಸವನ್ನು ಸಂತೃಪ್ತಿಯಿಂದ ಪ್ರಾಮಾಣಿಕವಾಗಿ ಮಾಡಿದವನು ಭಗವಂತನ ಅನುಗ್ರಹ ಪಡೆದು ರಾಜನಾದಾನು. ಕೆಲಸವನ್ನು ಮಾಡುವಾಗ ಮನಸ್ಸಿಟ್ಟು ಮಾಡು. ಪ್ರತಿಫಲ ರೂಪದಲ್ಲಿ ಏನು ಸಿಗುತ್ತದೆಯೋ ಅದನ್ನು ಗೊಣಗಾಡದೆ ಉಣ್ಣು. ಲೋಕದಲ್ಲಿ ಏನೆಲ್ಲಾ ಕಷ್ಟಗಳು, ಜವಾಬ್ದಾರಿಗಳು ಬರುತ್ತವೆಯೋ ಅದನ್ನು ಅನುಭವಿಸು. ಜೀವನದ ಪರಮರಕ್ಷಕನಾದ ಭಗವಂತನನ್ನು ಮಾತ್ರ ಮರೆಯಬೇಡ. ಇದ್ದುದರಲ್ಲೇ ಸುಖ ಪಡು. ಅವನ ಕರೆ ಬಂದ ತಕ್ಷಣ ಈ ಲೋಕಕ್ಕೆ ಅಂಟಿಕೊಳ್ಳದೆ, ದುಃಖ ಪಡದೆ ಹೊರಟುಬಿಡು, ಇದುವೇ ಬದುಕಿನ ಪರಿಪೂರ್ಣತೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!