Sunday, July 13, 2025
spot_img
Homeತಾಲೂಕು ಸುದ್ದಿಧರ್ಮರಕ್ಷಣೆ ಜತೆಗೆ ದಾನ ಸಂಸ್ಕೃತಿಯ ಮಹತ್ವ ಯುವಕರು ಅರಿಯಬೇಕಿದೆ : ಅಕ್ಕಿ ಶಾರದ

ಧರ್ಮರಕ್ಷಣೆ ಜತೆಗೆ ದಾನ ಸಂಸ್ಕೃತಿಯ ಮಹತ್ವ ಯುವಕರು ಅರಿಯಬೇಕಿದೆ : ಅಕ್ಕಿ ಶಾರದ

ಹಿಂದೂ ಮಹಾಗಣಪತಿ ಸಮಿತಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ಹಗರಿಬೊಮ್ಮನಹಳ್ಳಿ.

ಸನಾತನ ಧರ್ಮದಲ್ಲಿ ದಾನ ಧರ್ಮಕ್ಕೆ ವಿಶೇಷ ಮಹತ್ವವಿದೆ. ಇಂದಿನ ಯುವಕರು ಧರ್ಮ ರಕ್ಷಣೆಗೆ ನೀಡುವಷ್ಟೇ ದಾನ ಸಂಸ್ಕೃತಿಗೆ ಆದ್ಯತೆ ನೀಡಬೇಕಿದೆ ಎಂದು ಸಾಹಿತ್ಯೋಪಾಸಕಿ ಅಕ್ಕಿ ಶಾರದ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ನೀಡಿ ಬಳಿಕ ಮಾತನಾಡಿದರು. ದಾನವೆಂದರೇ ಕೇವಲ ಹಣ ನೀಡುವುದಷ್ಟೇ ಅಲ್ಲ. ನಮ್ಮಿಂದಾಗುವ ಚಿಕ್ಕ ಚಿಕ್ಕ ಸಹಾಯಗಳು ಇನ್ನೊಬ್ಬರ ಅಗತ್ಯತೆಗಳನ್ನು ಪೂರ್ಣಗೊಳಿಸುತ್ತವೆ. ರಕ್ತದಾನ ಶ್ರೇಷ್ಟ ದಾನವಾಗಿದೆ. ನಾವು ನೀಡುವ ರಕ್ತದಿಂದ ಅನೇಕರಿಗೆ ಅನುಕೂಲವಾಗಲಿದೆ. ಗರ್ಭೀಣಿಯರಿಗೆ, ವಯೋವೃದ್ಧರಿಗೆ, ರಕ್ತಹೀನತೆಯಿಂದ ಬಳಲುತ್ತಿರುವವರಗೆ ರಕ್ತದ ಅಗತ್ಯ ತುಂಬಾ ಇರುತ್ತದೆ. ಯಾವುದೇ ಕಾರ್ಖಾನೆಯಲ್ಲಿ ತಯಾರು ಮಾಡಲು ಸಾಧ್ಯವಿರದ ವಸ್ತು ರಕ್ತವಾಗಿದೆ. ಮನುಷ್ಯನಿಂದ ಮನುಷ್ಯನಿಗೆ ಸದ್ಭಳಕೆಯಾಗಬಲ್ಲ ರಕ್ತವನ್ನು ನಾವು ಆರೋಗ್ಯವಿದ್ದಾಗಲೇ ರಕ್ತದಾನ ಮಾಡುವುದು ಶ್ರೇಷ್ಟ ಕೆಲಸವಾಗಿದೆ. ಹಾಗಾಗೀ ಯುವಜನತೆ ಮತ್ತು ಮಹಿಳೆಯರು ರಕ್ತದಾನ ವಿಚಾರದಲ್ಲಿ ಅಲೋಚನೆ ಮಾಡದೇ ಸ್ವಯಂಪ್ರೇರಿತರಾಗಿ ರಕ್ತವನ್ನು ದಾನಮಾಡಲು ಮುಂದಾಗಬೇಕು ಎಂದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ಹಿಂದೂ ಮಹಾಗಣಪತಿ ಸಮಿತಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅಕ್ಕಿ ಕುಟುಂಬದ ಅಕ್ಕಿ ಶಾರದ, ಅಕ್ಕಿ ನಿವೇದಿತಾ ಪ್ರಸನ್ನ, ಅಕ್ಕಿ ಸಂಪದ ರಕ್ತದಾನ ನೀಡಿ ಮಾದರಿಯಾದರು.

ವೇಳೆ ಅಕ್ಕಿ ಕುಟುಂಬದ ಅಕ್ಕಿ ನಿವೇದಿತಾ ಪ್ರಸನ್ನ, ಅಕ್ಕಿ ಸಂಪದ ರಕ್ತದಾನ ನೀಡಿದರು. ನಿವೃತ್ತ ಮುಖ್ಯಗುರು ರೊಟ್ಟಿ ಕೊಟ್ರಪ್ಪ, ಹಿಂದೂ ಮಹಾಗಣಪತಿ ಸಮಿತಿಯ ಸಂಚಾಲಕ ನಾಗರಾಜ ಚಿಂತ್ರಪಳ್ಳಿ, ಜಯರಾಮ ನಾಣಿಕೇರಿ, ಪ್ರಮುಖರಾದ ಸಂತೋಷ ಪೂಜಾರ್, ಟಿ.ಎಚ್.ಎಂ.ನಾಗರಾಜ, ಸಂಪತ್ ಮೂರ್ತಿ, ಕೊಟ್ರೇಶ್, ಗಣೇಶ್ , ಚಿಂತ್ರಪಳ್ಳಿ ರವಿಕುಮಾರ್, ಯು.ವೀರೇಂದ್ರ, ಪವನ, ವಿನಾಯಕ, ಸ್ವಾಮಿ ವಿವೇಕಾನಂದ ರಕ್ತಭಂಡಾರದ ಮಹೇಂದ್ರ, ವಿರೂಪಾಕ್ಷಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಪ್ರಮೋದಿನಿ, ಸಮುದಾಯ ಅರೋಗ್ಯಅಧಿಕಾರಿಗಳಾದ ಪೂಜಾ, ರೇಖಾ, ಕ್ಷೇತ್ರ ಅರೋಗ್ಯ ಶಿಕ್ಷಣಅಧಿಕಾರಿ ಯಮುನಾ, ಅಶಾ ಕಾರ್ಯಕರ್ತೆರಾದ ಎಸ್.ಮಂಜುಳಾ, ವೆಂಕಟಶಿವಮ್ಮ ಇತರರಿದ್ದರು.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!