Sunday, July 13, 2025
spot_img
Homeಜಿಲ್ಲಾ ಸುದ್ದಿವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಬಿಎಸ್ಸಿ ಪಠ್ಯದಲ್ಲಿ ಸಾಹಿತಿ ಎ.ಆರ್.ಪಂಪಣ್ಣರ ಕಥೆ ಆಯ್ಕೆ, ಕಥೆ ಯಾವುದು ಗೊತ್ತೇ...

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಬಿಎಸ್ಸಿ ಪಠ್ಯದಲ್ಲಿ ಸಾಹಿತಿ ಎ.ಆರ್.ಪಂಪಣ್ಣರ ಕಥೆ ಆಯ್ಕೆ, ಕಥೆ ಯಾವುದು ಗೊತ್ತೇ ? ಇದನ್ನು ಓದಿ

  • ಡಾ.ಅಕ್ಕಿ.ಬಸವೇಶ

ತ್ಯಾಗಭೂಮಿ ಡಿಜಿಟಲ್ ಡೆಸ್ಕ್ :

ಹಗರಿಬೊಮ್ಮನಹಳ್ಳಿ

ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ನಿವಾಸಿ ಸ್ಥಳೀಯ ಸಾಹಿತಿ ಎ.ಆರ್.ಪಂಪಣ್ಣನವರು ತುಂಬು ಸಜ್ಜನಿಕೆಯ, ಸರಳ ವ್ಯಕ್ತಿತ್ವದ ಹಿರಿಯ ಸಾಹಿತಿ. ಮೂಲತಃ ಕೃಷಿ ಕುಟುಂಬದ ಹಿನ್ನಲೆ ಹೊಂದಿರುವ ಪಂಪಣ್ಣನವರು ಜೀವಪರವಾದ ತಮ್ಮ ಸಮಾಜಮುಖಿ ಚಿಂತನೆಗಳ ಪ್ರವೃತ್ತಿಯ ಫಲದಿಂದಾಗಿಯೇ ಸಾಹಿತಿ ಆದವರು. 80 ದಶಕದಿಂದಲೇ ತಮ್ಮ ಸಾಹಿತ್ಯಿಕ ಪಯಣ ಆರಂಭಿಸಿದ ಪಂಪಣ್ಣನವರು ಈಗಾಗಲೇ ಪ್ರಬಂಧ, ಕಥೆಗಳಂಥ  ಸಾಹಿತ್ಯಪ್ರಕಾರಗಳಲ್ಲಿ ಅಕ್ಷರ ಕೃಷಿ ಮಾಡಿದ್ದಾರೆ. :

1.ಮಾಮರವೇ ಮಾಮರವೇ (ಪ್ರಬಂಧ ಸಂಕಲನ), 2.ಬೇಯುವ ಉಸಿರಿನ ಗುರುತು (ಕಥಾ ಸಂಕಲನ), 3.ಚಪ್ಪರ – (ಕಥಾ ಸಂಕಲನ), 4.ಶೂನ್ಯದಿಂದತ್ತತ್ತ (ಕಥಾ ಸಂಕಲನ)

ಹೀಗೆ ಒಟ್ಟು ಒಂದು ಪ್ರಬಂಧ ಸಂಕಲನ ಹಾಗೂ ಮೂರು ಕಥಾ ಸಂಕಲನಗಳ ರಚನೆಕಾರರಾಗಿರುವ ಪಂಪಣ್ಣನವರು ಅಷ್ಟಾಗಿ ಅಸ್ಮಿತತೆಯ ವ್ಯಸನಗಳಿಂದ ದೂರವೇ ಉಳಿದವರು. ಸಾಹಿತ್ಯಿಕ ಜಗತ್ತಿನ ಯಾವ ಸ್ಪರ್ಧೆಗೂ ಬೀಳದ ಪಂಪಣ್ಣನವರು ತಾವು ಕಂಡುಂಡ ತಮ್ಮ ಬದುಕಿನ ಲೋಕಾನುಭವವನ್ನು,ಜೀವನ ಮೌಲ್ಯಗಳ ಬಗೆಗಿನ ತಮ್ಮ ವಿವೇಕವನ್ನು ತಮ್ಮ ಸಾಹಿತ್ಯಿಕ ಕೃತಿಗಳಲ್ಲಿ ತಮ್ಮ ಪಾಡಿಗೆ ತಾವು ಮೌನದಿಂದಲೇ ದಾಖಲಿಸುತ್ತ ಬಂದವರು. ಇಳಿವಯಸ್ಸಿನ ಪಂಪಣ್ಣನವರು ಇಂದಿಗೂ ತಾಲೂಕಿನ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತುಂಬು ಪ್ರೀತಿಯಿಂದ, ಸದಾ ಚಟುವಟಿಕೆಯಿಂದ ಉತ್ಸಾಹದಿಂದಲೇ ಭಾಗವಹಿಸುತ್ತ ಹಿರಿಕಿರಿಯರೆನ್ನದೆ ಎಲ್ಲರ ಜೊತೆ ಒಡನಾಡಿಗಳಾಗಿದ್ದಾರೆ.

ಇದೀಗ ಸಾಹಿತ್ಯಾಭಿಮಾನಿಗಳಿಗೆ ಸಂತಸ ತಂದಿರುವ ಸುದ್ದಿ ಏನೇಂದರೇ ಸಾಹಿತಿ ಎ.ಆರ್.ಪಂಪಣ್ಣನವರು ರಚಿಸಿದ ಎಲ್ಲೋ ಜೋಗಪ್ಪ ನಿನ್ನರಮಾನೆ ಸಣ್ಣಕಥೆಯು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2024-25 ನೇ ಶೈಕ್ಷಣಿಕ ವರ್ಷದ ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಜಾರಿಗೆ ಬಂದಿರುವ ನೂತನ ಕನ್ನಡ ಪಠ್ಯಕ್ರಮದ ಭಾಗವಾಗಿ ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳವಿಜ್ಞಾನ ಸೌರಭಪಠ್ಯಪುಸ್ತಕಕ್ಕೆ ಆಯ್ಕೆಯಾಗಿರುವುದು ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಪಂಪಣ್ಣನವರ ಇಷ್ಟು ವರ್ಷಗಳ ಸುಧೀರ್ಘ ಸಾಹಿತ್ಯಿಕ ಸೇವೆಗೆ ಸಂದ ಗೌರವವೇ ಆಗಿದೆ. ಮೂಲಕ ನಮ್ಮದೇ ಪರಿಸರದ ಪ್ರಾದೇಶಿಕ ಬರಹಗಾರರು ಸಾಹಿತ್ಯಿಕ ಅಂಗಳದ ಮುನ್ನಲೆಗೆ ಬರುವಂತಾಗಿರುವುದು ನಿಜಕ್ಕೂ ಅಭಿಮಾನ ಪಡುವ  ಸಂಗತಿಯೇ ಆಗಿದೆ. ಇದರಿಂದಾಗಿ ಸಾಹಿತಿ ಪಂಪಣ್ಣನವರಿಂದ ಇನ್ನಷ್ಟು ಹೆಚ್ಚು ಕೃತಿಗಳು ರಚನೆಯಾಗಲಿ ನಿರೀಕ್ಷೆ ಸಹಜವಾಗಿ ಹೆಚ್ಚಾಗಿದೆ. ಜೊತೆಗೆ ಅವರಿಗೆ ಸಿಗಬೇಕಾದ ಗೌರವ, ಮನ್ನಣೆಗಳು ಹೆಚ್ಚೆಚ್ಚು ಸಿಗುವಂತಾಗಲಿ ಎಂಬುದು ತ್ಯಾಗಭೂಮಿ ಬಳಗದ ಆಶಯವಾಗಿದೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!