ಮಹಾದಾನಿ ಅನನ್ಯ ಚೇತನ ಅಕ್ಕಿ ಕೊಟ್ರಪ್ಪ : ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್
ಹಗರಿಬೊಮ್ಮನಹಳ್ಳಿ :
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ದಾನದಲ್ಲಿ ದೈವತ್ವ ಕಂಡ ಮಹಾದಾನಿ ದಿ.ಅಕ್ಕಿ ಕೊಟ್ರಪ್ಪ ಅವರ ನುಡಿನಮನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಸಭೆ ಹಮ್ಮಿಕೊಳ್ಳಲಾಗಿತ್ತು.
ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಅಕ್ಕಿ ಕೊಟ್ರಪ್ಪ ಅವರ ವ್ಯಕ್ತಿತ್ವ, ದಾನಧರ್ಮ ಇತರರಿಗೂ ಮಾದರಿಯಾಗಿದೆ. ಆಗಸ್ಟ್.25 ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ನುಡಿನಮನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಮಠದ ಭಕ್ತರಾಗಿ ಅತ್ಯಂತ ಶಿಸ್ತುಬದ್ಧ ಜೀವನ ನಡೆಸಿದ ಅಕ್ಕಿ ಕೊಟ್ರಪ್ಪ ಅವರು ಈ ನಾಡಿನ ಅನನ್ಯ ಚೇತನ ಶಕ್ತಿಯಾಗಿದ್ದಾರೆ. ಅವರು ಮಾಡಿದ ದಾನದ ಫಲ ಅವರ ಆತ್ಮಕ್ಕೆ ಶಾಂತಿ ನೀಡುತ್ತದೆ ಎಂದರು.
ವೀರಶೈವ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಗುರುಬಸವರಾಜ ಸೊನ್ನದ ಮಾತನಾಡಿ, ಅಕ್ಕಿ ಕೊಟ್ರಪ್ಪರವರು ಜಾತಿ, ಧರ್ಮವನ್ನು ಮೀರಿದ ಮಹಾದಾನಿಯಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ ಕೊಡುಗೆ ಅನನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲು ನುಡಿನಮನ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇವೇಳೆ ಅಕ್ಕಿ ಕೊಟ್ರಪ್ಪ ಅವರ ಮೇಲಿನ ಜನರ ಅಭಿಮಾನ ಕಂಡು ಅವರ ಪುತ್ರ ಅಕ್ಕಿ ಶಿವಕುಮಾರ್ ಕಣ್ಣೀರಿಟ್ಟರು. ವೀರಶೈವ ಸಮಾಜದ ಪ್ರಮುಖರಾದ ಬಸವರಾಜ ರಡ್ಡಿ, ಅಕ್ಕಿ ತೋಟೇಶ್, ವೈ.ಎಂ.ರೇವಣಸಿದ್ದೇಶ್ವರ, ಚಿನ್ಮಲ್ಲಿ ಸುರೇಶ್, ಕೊಟ್ರೇಶ್ ಸಕ್ರಹಳ್ಳಿ, ಬನ್ನಿಗೋಳ ವೆಂಕಣ್ಣ, ಯು.ಕೆ.ಸುರೇಶ್, ಹುಡೇದ್ ಗುರುಬಸವರಾಜ, ದೇವಿಪ್ರಸಾದ್, ಮೇದಾರ ಯಮುನಪ್ಪ, ಸಿದ್ದಯ್ಯ ಮಠದ್, ಡಿ.ಎಂ.ತೋಟಯ್ಯ, ಪಿ.ಕೊಟ್ರೇಶ್, ತ್ಯಾವಣಿಗಿ ಕೊಟ್ರೇಶ್, ಸೊಬಟಿ ಹರೀಶ್, ನಾಗಭೂಷಣ್ ಹಿರೇಮಠ್, ಸೋಗಿ ಕೊಟ್ರೇಶ್, ಗೌರಜ್ಜನವರ ಮಲ್ಲಿಕಾರ್ಜುನ, ವಿಶ್ವನಾಥ, ಎಚ್.ಬಿ.ಮಂಜುನಾಥ, ವೀರೇಶ್ ಪೋಟೋ, ಸತೀಶ್ ಪಾಟೀಲ್, ರಾಚಪ್ಪ, ಎಂ.ಗುರುಬಸವರಾಜ ಸೇರಿ ನೂರಾರು ಮುಖಂಡರು ಇತರರಿದ್ದರು.