Sunday, July 13, 2025
spot_img
Homeತಾಲೂಕು ಸುದ್ದಿದಾನ ಶ್ರೇಷ್ಟಿ ದಿ.ಅಕ್ಕಿ ಕೊಟ್ರಪ್ಪರವರ ನುಡಿನಮನ ಪೂರ್ವ ಸಿದ್ದತಾ ಸಭೆ : ಜನರ ಅಭಿಮಾನ ಕಂಡು...

ದಾನ ಶ್ರೇಷ್ಟಿ ದಿ.ಅಕ್ಕಿ ಕೊಟ್ರಪ್ಪರವರ ನುಡಿನಮನ ಪೂರ್ವ ಸಿದ್ದತಾ ಸಭೆ : ಜನರ ಅಭಿಮಾನ ಕಂಡು ಭಾವುಕರಾದ ಪುತ್ರ ಅಕ್ಕಿ ಶಿವಕುಮಾರ್

ಮಹಾದಾನಿ ಅನನ್ಯ ಚೇತನ ಅಕ್ಕಿ ಕೊಟ್ರಪ್ಪ : ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ

ತ್ಯಾಗಭೂಮಿ ಡಿಜಿಟಲ್ ಡೆಸ್ಕ್

ಹಗರಿಬೊಮ್ಮನಹಳ್ಳಿ : 

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ದಾನದಲ್ಲಿ ದೈವತ್ವ ಕಂಡ ಮಹಾದಾನಿ ದಿ.ಅಕ್ಕಿ ಕೊಟ್ರಪ್ಪ ಅವರ ನುಡಿನಮನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಸಭೆ ಹಮ್ಮಿಕೊಳ್ಳಲಾಗಿತ್ತು.

ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಅಕ್ಕಿ ಕೊಟ್ರಪ್ಪ ಅವರ ವ್ಯಕ್ತಿತ್ವ, ದಾನಧರ್ಮ ಇತರರಿಗೂ ಮಾದರಿಯಾಗಿದೆ. ಆಗಸ್ಟ್.25 ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ನುಡಿನಮನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಮಠದ ಭಕ್ತರಾಗಿ ಅತ್ಯಂತ ಶಿಸ್ತುಬದ್ಧ ಜೀವನ ನಡೆಸಿದ ಅಕ್ಕಿ ಕೊಟ್ರಪ್ಪ ಅವರು ಈ ನಾಡಿನ ಅನನ್ಯ ಚೇತನ ಶಕ್ತಿಯಾಗಿದ್ದಾರೆ. ಅವರು ಮಾಡಿದ ದಾನದ ಫಲ ಅವರ ಆತ್ಮಕ್ಕೆ ಶಾಂತಿ ನೀಡುತ್ತದೆ ಎಂದರು. 

ವೀರಶೈವ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಗುರುಬಸವರಾಜ ಸೊನ್ನದ ಮಾತನಾಡಿ, ಅಕ್ಕಿ ಕೊಟ್ರಪ್ಪರವರು ಜಾತಿ, ಧರ್ಮವನ್ನು ಮೀರಿದ ಮಹಾದಾನಿಯಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ ಕೊಡುಗೆ ಅನನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲು ನುಡಿನಮನ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇವೇಳೆ ಅಕ್ಕಿ ಕೊಟ್ರಪ್ಪ ಅವರ ಮೇಲಿನ ಜನರ ಅಭಿಮಾನ ಕಂಡು ಅವರ ಪುತ್ರ ಅಕ್ಕಿ ಶಿವಕುಮಾರ್ ಕಣ್ಣೀರಿಟ್ಟರು. ವೀರಶೈವ ಸಮಾಜದ ಪ್ರಮುಖರಾದ ಬಸವರಾಜ ರಡ್ಡಿ, ಅಕ್ಕಿ ತೋಟೇಶ್,  ವೈ.ಎಂ.ರೇವಣಸಿದ್ದೇಶ್ವರ, ಚಿನ್ಮಲ್ಲಿ ಸುರೇಶ್, ಕೊಟ್ರೇಶ್ ಸಕ್ರಹಳ್ಳಿ, ಬನ್ನಿಗೋಳ ವೆಂಕಣ್ಣ, ಯು.ಕೆ.ಸುರೇಶ್, ಹುಡೇದ್ ಗುರುಬಸವರಾಜ, ದೇವಿಪ್ರಸಾದ್, ಮೇದಾರ ಯಮುನಪ್ಪ, ಸಿದ್ದಯ್ಯ ಮಠದ್, ಡಿ.ಎಂ.ತೋಟಯ್ಯ, ಪಿ.ಕೊಟ್ರೇಶ್, ತ್ಯಾವಣಿಗಿ ಕೊಟ್ರೇಶ್, ಸೊಬಟಿ ಹರೀಶ್, ನಾಗಭೂಷಣ್ ಹಿರೇಮಠ್, ಸೋಗಿ ಕೊಟ್ರೇಶ್, ಗೌರಜ್ಜನವರ ಮಲ್ಲಿಕಾರ್ಜುನ, ವಿಶ್ವನಾಥ, ಎಚ್.ಬಿ.ಮಂಜುನಾಥ, ವೀರೇಶ್ ಪೋಟೋ, ಸತೀಶ್ ಪಾಟೀಲ್, ರಾಚಪ್ಪ, ಎಂ.ಗುರುಬಸವರಾಜ ಸೇರಿ ನೂರಾರು ಮುಖಂಡರು ಇತರರಿದ್ದರು. 

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!